ನೀ ಉತ್ತಿ ಬಿತ್ತಿ ಬೆಳೆದ
ಫಲವ ನೀನು ಉಣಲಿಲ್ಲ
ಬೆವರ, ರಕ್ತ ಬಸಿದರೂ
ನಿನಗೆ ನೇಣ ಕುಣಿಕೆ ತಪ್ಪಲಿಲ್ಲ

ನೀನು ಬದುಕುವ ಜೊತೆಗೆ
ಜಗ ಬದುಕಲಿ ಎಂಬ ನಿನ ಧರ್ಮ
ನೀನೇ ಬದುಕದಂಗಾಗೈತಿ
ಅವರ ಪಾಲಸಿಗಳ ಮರ್ಮ

ನೀನೆ ಈ ರಾಷ್ಟ್ರದ ಬೆನ್ನೆಲುಬು
ಹೆಮ್ಮೆಯಿಂದಲೆ ಹೇಳತಾರ
ನಿನ್ನ ಬೆನ್ನಿಗಂಟಿದ ಹೊಟ್ಟೆನೋಡಿ
ಚೆ ಚೆ ಹಿಂಗಾಗಬಾರದಿತ್ತು ಅಂತಾರ
ನೀನು ಬೆಳೆವುದು ಎಲ್ಲರಿಗಾಗಿ ಅಂತಾರ
ನಿನ್ನ ಬೆಳೆಯ ನಿನಗಿಲ್ದಂಗ ಮಾಡ್ಯಾರ

ಮಕ್ಕಳ ಸಾಲಿ, ಮನಿ ಸಂಗತಿ
ನೀ ಚಿಂತಿ ಮಾಡಾಂಗಾಯ್ತು
ಬಡ್ಡಿರೊಕ್ಕ ತಂದು ಸಾಲ ತೀರಿಸ್ದ
ಸಾವಿಗೆ ಶರಣಾಗುವಂಗಾಯ್ತು

ಸಾಲ ಅನ್ನೋದೊಂದು ಶೂಲ..
ನೀ ಮಾಡದಿರು ಪ್ರತಿಯೊಂದಕ್ಕೂ ಸಾಲ.

No comments:

Post a Comment