ನಾ ಹೋಗುತಿದ್ದ ರಸ್ತೇಲಿ ನೀನೇಕೆ ಬಂದೆ.....
**********************************
ನನ್ನ ಹಿಂದೆ ಮುಂದೆ ನಾ ಬೇಡವೆಂದರೂ ಬಂದೆ
ಅವಸರವಸರವಾಗಿದ್ದರುನೂ ನೀ ಎನ್ನ ಬಿಡದೆ ಬಂದೆ
ಬರಬೇಡೆನ್ನಜೊತೆಗೂಡಿ ಎಂದರು ಓಡೋಡಿ ಬಂದೆ
ಉರಿಬಿಸಿಲ ತಾಳದೆ ನಾನೊಮ್ಮೆ ನಿನ್ನ ನೋಡಿದೆ.....
ಹೇಳಿದರು ಕೇಳದೆ ನೀ ಬಿಡಲಿಲ್ಲ ನನ್ನನು ಆ ಉರಿಬಿಸಿಲಲಿ
ರೂಪವಿಲ್ಲದ ನಿನ್ನ ರೂಪವನ್ನು ಹೇಗೆ ಗುರುತು ಹಿಡಿಯಲಿ
ರೂಪವಿಲ್ಲದ ನಿನ್ನ ನಾನು ನನ್ನ ನೆರಳೆಂದು ಹೇಗೆ ನಂಬಲಿ
ನಿನ್ನ ರೂಪವನ್ನು ತಿಳಿಯಲು ನಾನ್ಯಾವ ಕಾರ್ಯ ಮಾಡಲಿ......
ನೀ ಬಂದರೆ ಬೆಳಕಲ್ಲಿ ಕಪ್ಪಾಗಿ...
ನಂಬುವೆನು ನೀ ಎನ್ನ ನೆರಳೆಂದು
ನೀ ಬಂದರೆ ಕತ್ತಲಲ್ಲಿ ಬಿಳುಪಾಗಿ..
ನಾ ಹೇಗೆ ನಂಬಲಿ ನೀ ಎನ್ನ ನೆರಳೆಂದು...
**************************
ನನ್ನ ಹಿಂದೆ ಮುಂದೆ ನಾ ಬೇಡವೆಂದರೂ ಬಂದೆ
ಅವಸರವಸರವಾಗಿದ್ದರುನೂ ನೀ ಎನ್ನ ಬಿಡದೆ ಬಂದೆ
ಬರಬೇಡೆನ್ನಜೊತೆಗೂಡಿ ಎಂದರು ಓಡೋಡಿ ಬಂದೆ
ಉರಿಬಿಸಿಲ ತಾಳದೆ ನಾನೊಮ್ಮೆ ನಿನ್ನ ನೋಡಿದೆ.....
ಹೇಳಿದರು ಕೇಳದೆ ನೀ ಬಿಡಲಿಲ್ಲ ನನ್ನನು ಆ ಉರಿಬಿಸಿಲಲಿ
ರೂಪವಿಲ್ಲದ ನಿನ್ನ ರೂಪವನ್ನು ಹೇಗೆ ಗುರುತು ಹಿಡಿಯಲಿ
ರೂಪವಿಲ್ಲದ ನಿನ್ನ ನಾನು ನನ್ನ ನೆರಳೆಂದು ಹೇಗೆ ನಂಬಲಿ
ನಿನ್ನ ರೂಪವನ್ನು ತಿಳಿಯಲು ನಾನ್ಯಾವ ಕಾರ್ಯ ಮಾಡಲಿ......
ನೀ ಬಂದರೆ ಬೆಳಕಲ್ಲಿ ಕಪ್ಪಾಗಿ...
ನಂಬುವೆನು ನೀ ಎನ್ನ ನೆರಳೆಂದು
ನೀ ಬಂದರೆ ಕತ್ತಲಲ್ಲಿ ಬಿಳುಪಾಗಿ..
ನಾ ಹೇಗೆ ನಂಬಲಿ ನೀ ಎನ್ನ ನೆರಳೆಂದು...
ಬದುಕಿಗೆ ಅರ್ಥ ಬೇಕು
----------------------------------------------
ಕೋಪವೆಂಬ ಮಂಜಿಗೆ ,ನಗುವೆಂಬ ಬೆಂಕಿಬೇಕು
-ಕರಗಲು
ದ್ವೇಷವೆಂಬ ಉಪ್ಪಿಗೆ ,ಸ್ನೇಹವೆಂಬ ನೀರು ಬೇಕು
- ಅರಗಲು
ಬದುಕೆಂಬ ಹೂವಿಗೆ ,ಹಣ ವೆಂಬ ಸೂರ್ಯ ಬೇಕು ,
-ಅರಳಲು
ಆಸೆಯೆಂಬ ನದಿಗೆ, ಮಿತಿಯೆಂಬ ದಡಬೇಕು ,
-ತಡೆಯಲು
ಸ್ನೇಹ ವೆಂಬ ಹಾಡಿಗೆ , ಪ್ರೀತಿ ಯೆಂಬ ತಾಳ ಬೇಕು ,
-ಬೆರೆಯಲು
ಧೇಹ ವೆಂಬ ಧೇಶಕೆ , ಉಸಿರೆಂಬ ಏಕತೆ ಬೇಕು ,
-ಬದುಕಲು
ಚಿಪ್ಪೆಂಬ ಮುಖಕೆ ,ಹವಳವೆಂಬ ನಗು ಬೇಕು ,
-ಹೊಳೆಯಲು
--------------------------
ಕೋಪವೆಂಬ ಮಂಜಿಗೆ ,ನಗುವೆಂಬ ಬೆಂಕಿಬೇಕು
-ಕರಗಲು
ದ್ವೇಷವೆಂಬ ಉಪ್ಪಿಗೆ ,ಸ್ನೇಹವೆಂಬ ನೀರು ಬೇಕು
- ಅರಗಲು
ಬದುಕೆಂಬ ಹೂವಿಗೆ ,ಹಣ ವೆಂಬ ಸೂರ್ಯ ಬೇಕು ,
-ಅರಳಲು
ಆಸೆಯೆಂಬ ನದಿಗೆ, ಮಿತಿಯೆಂಬ ದಡಬೇಕು ,
-ತಡೆಯಲು
ಸ್ನೇಹ ವೆಂಬ ಹಾಡಿಗೆ , ಪ್ರೀತಿ ಯೆಂಬ ತಾಳ ಬೇಕು ,
-ಬೆರೆಯಲು
ಧೇಹ ವೆಂಬ ಧೇಶಕೆ , ಉಸಿರೆಂಬ ಏಕತೆ ಬೇಕು ,
-ಬದುಕಲು
ಚಿಪ್ಪೆಂಬ ಮುಖಕೆ ,ಹವಳವೆಂಬ ನಗು ಬೇಕು ,
-ಹೊಳೆಯಲು
ಬೆಳಕು.
===============
ನಂಬಿಕೆ ಹರಡಲಿ...
ವಿಶ್ವಾಸ ಬೆಳಗಲಿ..
ದ್ವೇಷವೆಂಬ ಕತ್ತಲು ಸರಿದು,
ಪ್ರೀತಿಯ ಬೆಳಕು ಹರಿಯಲಿ…
ಸಹೋದರತೆ ಹರಡಲಿ…
ವಾತ್ಸಲ್ಯತೆ ಬೆಳಗಲಿ…
ಜಾತೀವಾದವೆಂಬ ಕತ್ತಲು ಸರಿದು,
ಮಾನವೀಯತೆಯ ಬೆಳಕು ಹರಿಯಲಿ..
ಧರ್ಮ ಹರಡಲಿ..
ನ್ಯಾಯವು ಬೆಳಗಲಿ…
ಭ್ರಷ್ಟತೆಯೆಂಬ ಕತ್ತಲು ಸರಿದು,
ಅಭಿವೃಧಿಯ ಬೆಳಕು ಹರಿಯಲಿ…
ಆತ್ಮವಿಶ್ವಾಸ ಹರಡಲಿ ..
ಆಶಾಜ್ಯೋತಿ ಬೆಳಗಲಿ ..
ಅಜ್ಞಾನವೆಂಬ ಕತ್ತಲು ಸರಿದು ,
ವಿಜ್ಞಾನದ ಬೆಳಕು ಹರಿಯಲಿ ..
===============
ನಂಬಿಕೆ ಹರಡಲಿ...
ವಿಶ್ವಾಸ ಬೆಳಗಲಿ..
ದ್ವೇಷವೆಂಬ ಕತ್ತಲು ಸರಿದು,
ಪ್ರೀತಿಯ ಬೆಳಕು ಹರಿಯಲಿ…
ಸಹೋದರತೆ ಹರಡಲಿ…
ವಾತ್ಸಲ್ಯತೆ ಬೆಳಗಲಿ…
ಜಾತೀವಾದವೆಂಬ ಕತ್ತಲು ಸರಿದು,
ಮಾನವೀಯತೆಯ ಬೆಳಕು ಹರಿಯಲಿ..
ಧರ್ಮ ಹರಡಲಿ..
ನ್ಯಾಯವು ಬೆಳಗಲಿ…
ಭ್ರಷ್ಟತೆಯೆಂಬ ಕತ್ತಲು ಸರಿದು,
ಅಭಿವೃಧಿಯ ಬೆಳಕು ಹರಿಯಲಿ…
ಆತ್ಮವಿಶ್ವಾಸ ಹರಡಲಿ ..
ಆಶಾಜ್ಯೋತಿ ಬೆಳಗಲಿ ..
ಅಜ್ಞಾನವೆಂಬ ಕತ್ತಲು ಸರಿದು ,
ವಿಜ್ಞಾನದ ಬೆಳಕು ಹರಿಯಲಿ ..
ಅರ್ಧರಾತ್ರಿಯಲ್ಲಿ ಯಾರ ನೆನಪಾಯಿತೆಂದು ತಂಗಾಳಿಯು ಕೇಳಿತು
ಇನ್ನುಳಿದ ರಾತ್ರಿಯನ್ನು ಕಳೆಯುವುದು ಹೇಗೆಂದು ಕಂಬನಿಯು ಕೇಳಿತು.
ಪ್ರೇಮವೆಂಬುದು ಎಂಥಾ ಮರುಳಾಟವೆಂದು ಭಾರವಾಯಿತು ಮನಸ್ಸು
ಬಿರುಗಾಳಿಯಲ್ಲಿ ದೀಪ ಉರಿಸಿದ್ದೇಕೆಂದು ಕಣ್ಣೆವೆಯು ಕೇಳಿತು
ನನ್ನೆರೆಡು ಕೈ ಹಿಡಿದು ನೋಡಿದಾ ನೋಟದಲಿ ಏನಿತ್ತು ಏನಿಲ್ಲ
ಕೊನೆಗಳಿಗೆಯಲ್ಲಿ ಭಾಷೆ ತಪ್ಪಿದವರಾರೆಂದು ತೊಯ್ದ ಕೆನ್ನೆಯು ಕೇಳಿತು.
ಯಾವುದೋ ನೋವೊಂದು ನಯನ ಹೂಗಳಲ್ಲಿ ಇಬ್ಬನಿಯ ಸುರಿಸುತಿಹುದು
ಕೊನೆಯಿಲ್ಲವೆ 'ಮುಕ್ತಾ' ಇದಕೆಂದು ಎಲ್ಲೋ ಅಡಗಿದ್ದ ನಗೆಯು ಕೇಳಿತು.
ಇನ್ನುಳಿದ ರಾತ್ರಿಯನ್ನು ಕಳೆಯುವುದು ಹೇಗೆಂದು ಕಂಬನಿಯು ಕೇಳಿತು.
ಪ್ರೇಮವೆಂಬುದು ಎಂಥಾ ಮರುಳಾಟವೆಂದು ಭಾರವಾಯಿತು ಮನಸ್ಸು
ಬಿರುಗಾಳಿಯಲ್ಲಿ ದೀಪ ಉರಿಸಿದ್ದೇಕೆಂದು ಕಣ್ಣೆವೆಯು ಕೇಳಿತು
ನನ್ನೆರೆಡು ಕೈ ಹಿಡಿದು ನೋಡಿದಾ ನೋಟದಲಿ ಏನಿತ್ತು ಏನಿಲ್ಲ
ಕೊನೆಗಳಿಗೆಯಲ್ಲಿ ಭಾಷೆ ತಪ್ಪಿದವರಾರೆಂದು ತೊಯ್ದ ಕೆನ್ನೆಯು ಕೇಳಿತು.
ಯಾವುದೋ ನೋವೊಂದು ನಯನ ಹೂಗಳಲ್ಲಿ ಇಬ್ಬನಿಯ ಸುರಿಸುತಿಹುದು
ಕೊನೆಯಿಲ್ಲವೆ 'ಮುಕ್ತಾ' ಇದಕೆಂದು ಎಲ್ಲೋ ಅಡಗಿದ್ದ ನಗೆಯು ಕೇಳಿತು.
ನೀ ಉತ್ತಿ ಬಿತ್ತಿ ಬೆಳೆದ
ಫಲವ ನೀನು ಉಣಲಿಲ್ಲ
ಬೆವರ, ರಕ್ತ ಬಸಿದರೂ
ನಿನಗೆ ನೇಣ ಕುಣಿಕೆ ತಪ್ಪಲಿಲ್ಲ
ನೀನು ಬದುಕುವ ಜೊತೆಗೆ
ಜಗ ಬದುಕಲಿ ಎಂಬ ನಿನ ಧರ್ಮ
ನೀನೇ ಬದುಕದಂಗಾಗೈತಿ
ಅವರ ಪಾಲಸಿಗಳ ಮರ್ಮ
ನೀನೆ ಈ ರಾಷ್ಟ್ರದ ಬೆನ್ನೆಲುಬು
ಹೆಮ್ಮೆಯಿಂದಲೆ ಹೇಳತಾರ
ನಿನ್ನ ಬೆನ್ನಿಗಂಟಿದ ಹೊಟ್ಟೆನೋಡಿ
ಚೆ ಚೆ ಹಿಂಗಾಗಬಾರದಿತ್ತು ಅಂತಾರ
ನೀನು ಬೆಳೆವುದು ಎಲ್ಲರಿಗಾಗಿ ಅಂತಾರ
ನಿನ್ನ ಬೆಳೆಯ ನಿನಗಿಲ್ದಂಗ ಮಾಡ್ಯಾರ
ಮಕ್ಕಳ ಸಾಲಿ, ಮನಿ ಸಂಗತಿ
ನೀ ಚಿಂತಿ ಮಾಡಾಂಗಾಯ್ತು
ಬಡ್ಡಿರೊಕ್ಕ ತಂದು ಸಾಲ ತೀರಿಸ್ದ
ಸಾವಿಗೆ ಶರಣಾಗುವಂಗಾಯ್ತು
ಸಾಲ ಅನ್ನೋದೊಂದು ಶೂಲ..
ನೀ ಮಾಡದಿರು ಪ್ರತಿಯೊಂದಕ್ಕೂ ಸಾಲ.
ಫಲವ ನೀನು ಉಣಲಿಲ್ಲ
ಬೆವರ, ರಕ್ತ ಬಸಿದರೂ
ನಿನಗೆ ನೇಣ ಕುಣಿಕೆ ತಪ್ಪಲಿಲ್ಲ
ನೀನು ಬದುಕುವ ಜೊತೆಗೆ
ಜಗ ಬದುಕಲಿ ಎಂಬ ನಿನ ಧರ್ಮ
ನೀನೇ ಬದುಕದಂಗಾಗೈತಿ
ಅವರ ಪಾಲಸಿಗಳ ಮರ್ಮ
ನೀನೆ ಈ ರಾಷ್ಟ್ರದ ಬೆನ್ನೆಲುಬು
ಹೆಮ್ಮೆಯಿಂದಲೆ ಹೇಳತಾರ
ನಿನ್ನ ಬೆನ್ನಿಗಂಟಿದ ಹೊಟ್ಟೆನೋಡಿ
ಚೆ ಚೆ ಹಿಂಗಾಗಬಾರದಿತ್ತು ಅಂತಾರ
ನೀನು ಬೆಳೆವುದು ಎಲ್ಲರಿಗಾಗಿ ಅಂತಾರ
ನಿನ್ನ ಬೆಳೆಯ ನಿನಗಿಲ್ದಂಗ ಮಾಡ್ಯಾರ
ಮಕ್ಕಳ ಸಾಲಿ, ಮನಿ ಸಂಗತಿ
ನೀ ಚಿಂತಿ ಮಾಡಾಂಗಾಯ್ತು
ಬಡ್ಡಿರೊಕ್ಕ ತಂದು ಸಾಲ ತೀರಿಸ್ದ
ಸಾವಿಗೆ ಶರಣಾಗುವಂಗಾಯ್ತು
ಸಾಲ ಅನ್ನೋದೊಂದು ಶೂಲ..
ನೀ ಮಾಡದಿರು ಪ್ರತಿಯೊಂದಕ್ಕೂ ಸಾಲ.
ಗೆಳತೀ...ನೀನೆಂದರೆ...?
ಕಾದು ಕಾವಲಿಯಾದ ಮನಸಿಗೆ..ಹೊಂಗೆ ತಂಪು....!!
ಇರುಳ ಕರಾಳತೆಯಲ್ಲಿ...ಕಳೆದು ಹೋಗುವ...ಕನಸು...!!
ಕಲ್ಪನೆ, ಪರಿಕಲ್ಪನೆ ಬದಲಾವಣೆ ! ನಾಳೆಯ ನಿರೀಕ್ಷೆ,..ಪ್ರತೀಕ್ಷೆ....!!
ಮುಂಗುರುಳು ಮುಂಜಾನೆಯ...ಮಂಜ ಹನಿ...!!
ಕೇಳಿದಷ್ಟೂ ಕೇಳಬೇಕೆನಿಸುವ...ಕಹಾನಿ...!!
ನನ್ನೊಳಗಿನ ತುಮುಲ...ಹೊಯ್ದಾಟ...!!
ತನ್ನ ಅಸ್ತಿತ್ವಕ್ಕಾಗಿ...ಮಾತಿನ ಮೊರೆ ಹೋದ..ಪರಾವಲಂಬಿ ಮೌನ....!!
ಭರವಸೆಯ ಆಲಿಂಗನ...ಕಣ್ಣೋಟದ ಸಿಹಿ ಚುಂಬನ…ಒಂಟಿ ಕತ್ತಲ ಏಕಾಂಗಿತನ....!!
ಮತ್ತೆ..ನನ್ನೀ ಜೀವನ..! !! ಮೌನಿ !!
ಕಾದು ಕಾವಲಿಯಾದ ಮನಸಿಗೆ..ಹೊಂಗೆ ತಂಪು....!!
ಇರುಳ ಕರಾಳತೆಯಲ್ಲಿ...ಕಳೆದು ಹೋಗುವ...ಕನಸು...!!
ಕಲ್ಪನೆ, ಪರಿಕಲ್ಪನೆ ಬದಲಾವಣೆ ! ನಾಳೆಯ ನಿರೀಕ್ಷೆ,..ಪ್ರತೀಕ್ಷೆ....!!
ಮುಂಗುರುಳು ಮುಂಜಾನೆಯ...ಮಂಜ ಹನಿ...!!
ಕೇಳಿದಷ್ಟೂ ಕೇಳಬೇಕೆನಿಸುವ...ಕಹಾನಿ...!!
ನನ್ನೊಳಗಿನ ತುಮುಲ...ಹೊಯ್ದಾಟ...!!
ತನ್ನ ಅಸ್ತಿತ್ವಕ್ಕಾಗಿ...ಮಾತಿನ ಮೊರೆ ಹೋದ..ಪರಾವಲಂಬಿ ಮೌನ....!!
ಭರವಸೆಯ ಆಲಿಂಗನ...ಕಣ್ಣೋಟದ ಸಿಹಿ ಚುಂಬನ…ಒಂಟಿ ಕತ್ತಲ ಏಕಾಂಗಿತನ....!!
ಮತ್ತೆ..ನನ್ನೀ ಜೀವನ..! !! ಮೌನಿ !!
ಹೃದಯದಿ೦ದ ಪುಟಿದೇಳುವ ಕಣ್ಮು೦ದೆ ತೇಲಿಹೋಗುವ
ಮನಸ್ಸಿಗೆ ಮೋಡಿಹಾಕುವ ನೆನಪಿನ೦ಗಳಕ್ಕೆ ಕರೆದೊಯ್ಯುವ
ಆ ಸು೦ದರ ಸಾವಿರ ಸವಿ ಸವಿ ನೆನಪು
ನೀಲಕಾಶದ೦ತ ನಿನ್ನ ಕಣ್ಣಲ್ಲಿ ಕ೦ಡ
ಆ ಮೊದಲ ಪ್ರೀತಿಯ ನೆನಪು
ನಿನ್ನ ಒ೦ದೇ ಒ೦ದು ನೋಟಕ್ಕಾಗಿ ಎದುರು ನೋಡುತ್ತಿದ್ದ
ಆ ದಿನಗಳ ಎಳೆಮನಸ್ಸಿನ ನೆನಪು
ಮು೦ಗಾರಿನ ಸ್ಫರ್ಶದಿ೦ದ ಕಾಲ್ಗಳಿಗೆ ಕಚಗುಳಿಯಿಡುತ್ತಿದ್ದ
ಹಸಿರು ಹುಲ್ಲಿನ ಮೇಲೆ ಒಟ್ಟಾಗಿ ಹೆಜ್ಜೆ ಹಾಕಿದ ಹಸಿರು ನೆನಪು
ತ೦ಗಾಳಿ ಮೈ ಸೋಕಿದಾಗ ಆದ
ಆ ಮೊದಲ ರೋಮಾ೦ಚನದ ನೆನಪು
ಹೂದೋಟದ ನಡುವೆ ನಿನ್ನ ಹೆಗಲ ಮೇಲೆ
ತಲೆ ಇರಿಸಿ ಜಗವ ಮರೆತ ಹೂವ೦ತ ನೆನಪು
ಹುಸಿಮುನಿಸು ತೋರಿದಾಗ ಕೈ ಜೋಡಿಸಿ
ತು೦ಟತನ ತೋರಿದ ಆ ಸು೦ದರ ಸ೦ಜೆಯ ನೆನಪು
ಪ್ರತಿ ಹಾಡಿನಲ್ಲು ನಿನ್ನನ್ನೆ ನೆನಪಿಸುತ್ತಿದ್ದ
ನಿನ್ನ ನಿಸ್ವಾರ್ಥ ಪ್ರೀತಿಯ ನೆನಪು
ಹತ್ತಾರು ದಿನಗಳ ನ೦ತರ ನಮ್ಮ ಭೇಟಿಯಾದಾಗ
ಮಗುವ೦ತೆ ಬಿಗಿದಪ್ಪಿ ಅತ್ತ ಆ ಸುಮಧುರ ನೆನಪು
ನಿನ್ನ ಹೆಸರಿನ ಮೊದಲಕ್ಷರ ಕೇಳಿ ನಾಡಿ ಬಡಿತ
ನೂರಕ್ಕೇರುತ್ತಿದ್ದ ಆ ಭಾವನಾತ್ಮಕ ನೆನಪು
ಸಾವಿರ ಸಾವಿರ ಸವಿ ನೆನಪುಗಳನ್ನ ಬಚ್ಚಿಟ್ಟುರುವ
ಈ ಪುಟ್ಟ ಹೃದಯದ ಪ್ರತಿ ಬಡಿತವು ನಿನ್ನಿ೦ದ ನಿನಗಾಗಿ.....
ಮನಸ್ಸಿಗೆ ಮೋಡಿಹಾಕುವ ನೆನಪಿನ೦ಗಳಕ್ಕೆ ಕರೆದೊಯ್ಯುವ
ಆ ಸು೦ದರ ಸಾವಿರ ಸವಿ ಸವಿ ನೆನಪು
ನೀಲಕಾಶದ೦ತ ನಿನ್ನ ಕಣ್ಣಲ್ಲಿ ಕ೦ಡ
ಆ ಮೊದಲ ಪ್ರೀತಿಯ ನೆನಪು
ನಿನ್ನ ಒ೦ದೇ ಒ೦ದು ನೋಟಕ್ಕಾಗಿ ಎದುರು ನೋಡುತ್ತಿದ್ದ
ಆ ದಿನಗಳ ಎಳೆಮನಸ್ಸಿನ ನೆನಪು
ಮು೦ಗಾರಿನ ಸ್ಫರ್ಶದಿ೦ದ ಕಾಲ್ಗಳಿಗೆ ಕಚಗುಳಿಯಿಡುತ್ತಿದ್ದ
ಹಸಿರು ಹುಲ್ಲಿನ ಮೇಲೆ ಒಟ್ಟಾಗಿ ಹೆಜ್ಜೆ ಹಾಕಿದ ಹಸಿರು ನೆನಪು
ತ೦ಗಾಳಿ ಮೈ ಸೋಕಿದಾಗ ಆದ
ಆ ಮೊದಲ ರೋಮಾ೦ಚನದ ನೆನಪು
ಹೂದೋಟದ ನಡುವೆ ನಿನ್ನ ಹೆಗಲ ಮೇಲೆ
ತಲೆ ಇರಿಸಿ ಜಗವ ಮರೆತ ಹೂವ೦ತ ನೆನಪು
ಹುಸಿಮುನಿಸು ತೋರಿದಾಗ ಕೈ ಜೋಡಿಸಿ
ತು೦ಟತನ ತೋರಿದ ಆ ಸು೦ದರ ಸ೦ಜೆಯ ನೆನಪು
ಪ್ರತಿ ಹಾಡಿನಲ್ಲು ನಿನ್ನನ್ನೆ ನೆನಪಿಸುತ್ತಿದ್ದ
ನಿನ್ನ ನಿಸ್ವಾರ್ಥ ಪ್ರೀತಿಯ ನೆನಪು
ಹತ್ತಾರು ದಿನಗಳ ನ೦ತರ ನಮ್ಮ ಭೇಟಿಯಾದಾಗ
ಮಗುವ೦ತೆ ಬಿಗಿದಪ್ಪಿ ಅತ್ತ ಆ ಸುಮಧುರ ನೆನಪು
ನಿನ್ನ ಹೆಸರಿನ ಮೊದಲಕ್ಷರ ಕೇಳಿ ನಾಡಿ ಬಡಿತ
ನೂರಕ್ಕೇರುತ್ತಿದ್ದ ಆ ಭಾವನಾತ್ಮಕ ನೆನಪು
ಸಾವಿರ ಸಾವಿರ ಸವಿ ನೆನಪುಗಳನ್ನ ಬಚ್ಚಿಟ್ಟುರುವ
ಈ ಪುಟ್ಟ ಹೃದಯದ ಪ್ರತಿ ಬಡಿತವು ನಿನ್ನಿ೦ದ ನಿನಗಾಗಿ.....
ಹೃದಯ ಚಿತ್ರ
ಎಲ್ಲಿ ಬರೆಯಲಿ ಹೇಳು
ನನ್ನ ಹೃದಯದ ಮಾತನ್ನು
ನಿನ್ನ ಹೃದಯದ ಪುಟಗಳಲ್ಲೋ
ಆಕಾಶದ ಬೆಳ್ಳಿ ತಾರೆಯರ ನಡುವೆಯೋ\\
ಬರೆಯದಿರಲಾರೆ ಹೊಮ್ಮಿಬರುತ್ತಿದೆ ಕೇಳು
ಹೃದಯದ ಪಿಸುಮಾತು ಕೇಳಿಸಿಕೋ
ತಂಗಾಳಿಯ ಕಲರವದಲ್ಲಿ
ಹರಿಯುವ ನದಿಯ ಮಂಜುಳನಾದದಲ್ಲಿ
ಹಕ್ಕಿಗಳ ಚಿಲಿಪಿಲಿಗಾನದಲ್ಲಿ
ನನ್ನ ಒಲವ ಸುಧೆಯು ಹರಿಯುತಿದೆ ನೋಡು\\
ತೋರಿಸಿ ತೋರಿಸಿರೆಂದು ಕೇಳಬೇಡ
ಕಣ್ಣನೋಟದಲ್ಲೇ ಕಂಡುಕೊಳ್ಳಬೇಕು
ತುಟಿಯ ಮೇಲೆ ಹೊಮ್ಮುತಿದೆ
ಕೆನ್ನೆಯಲ್ಲಾ ಕೆಂಪಗಾಗಿದೆ
ಕಣ್ಣು ನಾಚುತಿದೆ
ಏಕೆಂದು ಹೃದಯವನ್ನೇ ಕೇಳು\\
ಹೃದಯ ಡಬ್ ಡಬ್ ಎಂದು ಮಿಡಿಯುತಿದೆ
ಅದು ಬರಿಯ ಶಬ್ದವಲ್ಲ ಕೇಳು ಗೆಳತಿ
ಅದು ನಿನ್ನಯ ಧ್ಯಾನ
ಎಂದು ನಿನ್ನ ಕಾಣುವೆಯೆಂಬ ಹಂಬಲದ ಬಡಿತವದು
ಬಂದು ಬಿಡು ಗೆಳತಿ ನಿನಗಾಗಿ ಕಾಯುತಿಹೆ
ಈ ಜೀವ ಹಿಡಿದುಕೊಂಡು ಕಾಯುತಿಹೆ ನನ್ನ ಹೃದಯದಲಿ
ನಿನ್ನದೆ ಚಿತ್ರವ ಬಿಡಿಸಿ\\
ಎಲ್ಲಿ ಬರೆಯಲಿ ಹೇಳು
ನನ್ನ ಹೃದಯದ ಮಾತನ್ನು
ನಿನ್ನ ಹೃದಯದ ಪುಟಗಳಲ್ಲೋ
ಆಕಾಶದ ಬೆಳ್ಳಿ ತಾರೆಯರ ನಡುವೆಯೋ\\
ಬರೆಯದಿರಲಾರೆ ಹೊಮ್ಮಿಬರುತ್ತಿದೆ ಕೇಳು
ಹೃದಯದ ಪಿಸುಮಾತು ಕೇಳಿಸಿಕೋ
ತಂಗಾಳಿಯ ಕಲರವದಲ್ಲಿ
ಹರಿಯುವ ನದಿಯ ಮಂಜುಳನಾದದಲ್ಲಿ
ಹಕ್ಕಿಗಳ ಚಿಲಿಪಿಲಿಗಾನದಲ್ಲಿ
ನನ್ನ ಒಲವ ಸುಧೆಯು ಹರಿಯುತಿದೆ ನೋಡು\\
ತೋರಿಸಿ ತೋರಿಸಿರೆಂದು ಕೇಳಬೇಡ
ಕಣ್ಣನೋಟದಲ್ಲೇ ಕಂಡುಕೊಳ್ಳಬೇಕು
ತುಟಿಯ ಮೇಲೆ ಹೊಮ್ಮುತಿದೆ
ಕೆನ್ನೆಯಲ್ಲಾ ಕೆಂಪಗಾಗಿದೆ
ಕಣ್ಣು ನಾಚುತಿದೆ
ಏಕೆಂದು ಹೃದಯವನ್ನೇ ಕೇಳು\\
ಹೃದಯ ಡಬ್ ಡಬ್ ಎಂದು ಮಿಡಿಯುತಿದೆ
ಅದು ಬರಿಯ ಶಬ್ದವಲ್ಲ ಕೇಳು ಗೆಳತಿ
ಅದು ನಿನ್ನಯ ಧ್ಯಾನ
ಎಂದು ನಿನ್ನ ಕಾಣುವೆಯೆಂಬ ಹಂಬಲದ ಬಡಿತವದು
ಬಂದು ಬಿಡು ಗೆಳತಿ ನಿನಗಾಗಿ ಕಾಯುತಿಹೆ
ಈ ಜೀವ ಹಿಡಿದುಕೊಂಡು ಕಾಯುತಿಹೆ ನನ್ನ ಹೃದಯದಲಿ
ನಿನ್ನದೆ ಚಿತ್ರವ ಬಿಡಿಸಿ\\
ಕನ್ನಡದ ಕಂಪು ಕನ್ನಡಿಗರ ಹೆಮ್ಮೆಯ ಗುಂಪು.
ಕನ್ನಡದ ಕಂಪು ಈ ಗುಂಪು ಶುರುವಾಗಿದ್ದು ೨೦೧೧ ರಲ್ಲಿ. ಅಂದಿನಿಂದ ಇಂದಿನವರೆಗೂ ತನ್ನ ಕಂಪನ್ನು ಹರಡುತ್ತಾ ಬಂದಿದೆ.
ಕಂಪಿನ ಮುಖ್ಯ ಉದ್ದೇಶ ಕನ್ನಡದ ಮೇಲಿನ ಭಾಷಾಭಿಮಾನ ಮೂಡಿಸುವಿಕೆ, ಕನ್ನಡವನ್ನು ಉಳಿಸಿ ಬೆಳೆಸಿ, ಕನ್ನಡ ಬಾರದ ಜನರಿಗೆ ಕಲಿಸುವುದು ಮುಖ್ಯ ಉದ್ದೇಶ. ಮುಖಪುಸ್ತಕವನ್ನು ಹೆಚ್ಚು ಜನರು ದುರುಪಯೋಗ ಮಾಡಿಕೊಳ್ಳುವುದು ಹೆಚ್ಚು ಆದ್ರೆ ಮುಖಪುಸ್ತಕದಲ್ಲಿ ಕೂಡ ಕನ್ನಡದ ಹಿರಿಮೆಯನು ತಿಳಿಸಿ ಒಳ್ಳೆ ಕೆಲಸ ಮಾಡಬಹುದು ಕನ್ನಡಿಗರನ್ನು ಜಾಗೃತಿ ಮೂಡಿಸಬಹುದು
ಈ ನಿಟ್ಟಿನಲ್ಲಿ ಕನ್ನಡದ ಕಂಪು ಕನ್ನಡಿಗರನು ಜಾಗೃತಗೊಳಿಸುವ ಕೆಲಸ ನಿರ್ವಹಿಸುತ್ತಿದೆ. ಮುಖಪುಸ್ತಕದಲ್ಲಿ ಎಲ್ಲ ಕನ್ನಡದ ಗುಂಪುಗಳಿಗೆ ಹೋಲಿಸಿದರೆ ಅತೀ ಹೆಚ್ಚು ಸದಸ್ಯ ಬಲವನ್ನು ಒಳಗೊಂಡಿದೆ ಸುಮಾರು ಸದ್ಯಕ್ಕೆ ೩೯ ಸಾವಿರಕ್ಕೂ ಹೆಚ್ಚು ಕನ್ನಡ ಸದಸ್ಯರು ಇದ್ದಾರೆ, ನಿಮ್ಮೆಲರ ಕನ್ನಡದ ಪ್ರೀತಿ ಮತ್ತು ಅಭಿಮಾನದಿಂದ ಗುಂಪು ಅದ್ಬುತವಾಗಿ ಕೆಲಸ ನಿರ್ವಹಣೆ ಮಾಡುತ್ತಿದೆ.
Subscribe to:
Posts (Atom)