ಮದುವೆ.
**************************
ಮದುವೆ ಎನ್ನುವುದು ಯಾವತ್ತೂ
ಆಗಬಾರದು ಬಂಧನ
ಇದು ಗಂಡು ಹೆಣ್ಣಿನ ನಡುವಿನ
ಜನ್ಮ ಜನ್ಮಾಂತರದ ಅನುಬಂಧನ

ಕೇವಲ ಕಲ್ಪನೆಯಿಂದ ಮಾತ್ರ
ಕೂಡಿರಬಾರದು ಜೀವನ
ಅದರಲ್ಲಿ ನೈಜ್ಯತೆ ಕೂಡ ಹೊಂದಿರಬೇಕು
ಸರಿಸಮಾನ

ಗಂಡ ಹೆಂಡತಿ ಕೂಡಿ ಬಾಳಿದರೆ
ಸುಖ - ಸಂಸಾರ
ಬಿರುಕು ಬಿಟ್ಟರೆ ಸಂಸಾರದಲ್ಲಿ ಇಲ್ಲ
ಯಾವತ್ತೂ ಸಾರ


ಅವಕಾಶ
____________________________________
ನಿರಾಶವಾದಿಯಾದರೆ ಮುಚ್ಚಿಕೊಳ್ಳುವುದು ನಿನ್ನ
ಬಾಳಿನ ಕಥನ

ಆಶಾವಾದಿಯಾದರೆ ಅವಕಾಶ ಬಾಗಿಲು ತೆರೆಯುವುದು
ಎಂದೂ ನವನವೀನ

ಒಲವು - ನೋವು
____________________________
ನೀ ಯಾರಿಂದಲೂ ನಿರೀಕ್ಷಿಸದಿರು
ಅತೀ ಹೆಚ್ಚು ಒಲವು

ನಿರೀಕ್ಷಿಸಿದರೆ ಅದರಿಂದ ದೊರೆಯುವುದು
ಕೇವಲ ನೋವು

ನಾ ಹೋಗುತಿದ್ದ ರಸ್ತೇಲಿ ನೀನೇಕೆ ಬಂದೆ.....
**********************************

ನನ್ನ ಹಿಂದೆ ಮುಂದೆ ನಾ ಬೇಡವೆಂದರೂ ಬಂದೆ

ಅವಸರವಸರವಾಗಿದ್ದರುನೂ ನೀ ಎನ್ನ ಬಿಡದೆ ಬಂದೆ

ಬರಬೇಡೆನ್ನಜೊತೆಗೂಡಿ ಎಂದರು ಓಡೋಡಿ ಬಂದೆ

ಉರಿಬಿಸಿಲ ತಾಳದೆ ನಾನೊಮ್ಮೆ ನಿನ್ನ ನೋಡಿದೆ.....


ಹೇಳಿದರು ಕೇಳದೆ ನೀ ಬಿಡಲಿಲ್ಲ ನನ್ನನು ಆ ಉರಿಬಿಸಿಲಲಿ

ರೂಪವಿಲ್ಲದ ನಿನ್ನ ರೂಪವನ್ನು ಹೇಗೆ ಗುರುತು ಹಿಡಿಯಲಿ

ರೂಪವಿಲ್ಲದ ನಿನ್ನ ನಾನು ನನ್ನ ನೆರಳೆಂದು ಹೇಗೆ ನಂಬಲಿ

ನಿನ್ನ ರೂಪವನ್ನು ತಿಳಿಯಲು ನಾನ್ಯಾವ ಕಾರ್ಯ ಮಾಡಲಿ......


ನೀ ಬಂದರೆ ಬೆಳಕಲ್ಲಿ ಕಪ್ಪಾಗಿ...

ನಂಬುವೆನು ನೀ ಎನ್ನ ನೆರಳೆಂದು

ನೀ ಬಂದರೆ ಕತ್ತಲಲ್ಲಿ ಬಿಳುಪಾಗಿ..

ನಾ ಹೇಗೆ ನಂಬಲಿ ನೀ ಎನ್ನ ನೆರಳೆಂದು...

ನಿನ್ನ ನೆನಪಿನ ತನ್ಮಯತೆಯಿಂದ
ಕಣ್ಣಿಂದ ಜಾರಿಬಿದ್ದ ಹನಿಯೊಂದು
ತೀರದಲಿ ಬಿದ್ದು ಕಡಲು ಸೇರಿತು…
ಮರೆಯಲಾರೆ.. ನಿನ್ನ ಇನ್ನೆಂದಿಗೂ..
ಆ ಹನಿಯ ನೀ ಹುಡುಕಿ ಕೊಟ್ಟರೆ….!

ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ,

ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ,.......

ನಿನ್ನ ಒಮ್ಮೆ ನೆನೆದು ನನ್ನ
ಮನಸ್ಸು ಮೆತ್ತಗಾಯಿತಲ್ಲ.....!!

ಬದುಕಿಗೆ ಅರ್ಥ ಬೇಕು
----------------------------------------------
ಕೋಪವೆಂಬ ಮಂಜಿಗೆ ,ನಗುವೆಂಬ ಬೆಂಕಿಬೇಕು
-ಕರಗಲು
ದ್ವೇಷವೆಂಬ ಉಪ್ಪಿಗೆ ,ಸ್ನೇಹವೆಂಬ ನೀರು ಬೇಕು 
- ಅರಗಲು
ಬದುಕೆಂಬ ಹೂವಿಗೆ ,ಹಣ ವೆಂಬ ಸೂರ್ಯ ಬೇಕು ,
-ಅರಳಲು
ಆಸೆಯೆಂಬ ನದಿಗೆ, ಮಿತಿಯೆಂಬ ದಡಬೇಕು ,
-ತಡೆಯಲು
ಸ್ನೇಹ ವೆಂಬ ಹಾಡಿಗೆ , ಪ್ರೀತಿ ಯೆಂಬ ತಾಳ ಬೇಕು ,
-ಬೆರೆಯಲು
ಧೇಹ ವೆಂಬ ಧೇಶಕೆ , ಉಸಿರೆಂಬ ಏಕತೆ ಬೇಕು ,
-ಬದುಕಲು
ಚಿಪ್ಪೆಂಬ ಮುಖಕೆ ,ಹವಳವೆಂಬ ನಗು ಬೇಕು ,
-ಹೊಳೆಯಲು